ಹುಬ್ಬಳ್ಳಿ : ರಾಜಧಾನಿ ಮತ್ತು ಉತ್ತರಕರ್ನಾಟಕದ ಮಧ್ಯೆ ವಂದೇ ಭಾರತ್ ಸೆಮಿಸ್ಪೀಡ್ ರೈಲಿನಲ್ಲಿ ಓಡಾಡಬೇಕು ಎಂಬ ಜನರ ಕನಸು ಶೀಘ್ರದಲ್ಲಿಯೇ ನನಸಾಗಲಿದೆ. ಈ ಕುರಿತು ಅಂತಿಮ ಅಂತದ ತಯಾರಿ ನಡೆಸಲಾಗುತ್ತಿದೆ.
ಹೌದು, ಬಹುನಿರೀಕ್ಷಿತ ಧಾರವಾಡ-ಬೆಂಗಳೂರು ಮಧ್ಯೆ ವಂದೇ ಭಾರತ ರೈಲು ಸಂಚಾರವನ್ನು ಮೇ 30ರಂದು ಆರಂಭಿಸಲಾಗುವುದು ಎಂದು ನೈರುತ್ಯ ರೈಲ್ವೆ ವಲಯ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಎರಡನೇ ವಂದೇ ಭಾರತ್ ರೈಲು ಓಡಾಟ ನಡೆಸಲಿದೆ.