ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಬೆಂಗಳೂರು ನಗರ(Bangalore), ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ(Heavy Rain)ಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ.
ಕಾರವಾರದಲ್ಲಿ 37.2 ಡಿಗ್ರಿ ಸೆಲ್ಸಿಯಸ್ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಯಲಹಂಕದಲ್ಲಿ 7 ಸೆಂ.ಮೀ ಮಳೆಯಾಗಿದೆ. ಭಾಲ್ಕಿ, ಹುಮನಾಬಾದ್, ಕಲಬುರಗಿ, ಪೊನ್ನಂಪೇಟೆ, ತೊಂಡೇಭಾವಿ, ಗೌರಿಬಿದನೂರು, ರಾಯಚೂರು, ಗಂಗಾವತಿ, ಸಿರುಗುಪ್ಪ, ಬೆಂಗಳೂರು ನಗರ, ಜಿಕೆವಿಕೆ, ಭದ್ರಾವತಿ, ಕೂಡಲಸಂಗಮ, ಕಮಲಾಪುರ, ಗಂಗಾವತಿ, ಮುದಗಲ್, ಬೀದರ್, ಬೆಂಗಳೂರು ಕೆಐಎಎಲ್ ವಿಮಾನ ನಿಲ್ದಾಣ, ಗೋಪಾಲನಗರ, ಚಿತ್ತಾಪುರ, ಮುನಿರಾಬಾದ್, ರೋಣ, ಸೈದಾಪುರ, ಯಡವಾಡ, ಔರಾದ್, ಕುರ್ಡಿ, ಉಚ್ಚಂಗಿದುರ್ಗ, ಚಿಕ್ಕಬಳ್ಳಾಪುರ, ಕುಡತಿನಿ, ಶಿಡ್ಲಘಟ್ಟ,